Latest topics
Top posters
| Admin (358) | ||||
| gclokesh (248) | ||||
| Danesh (66) | ||||
| ramya (58) | ||||
| teju. (51) | ||||
| binduhp (49) | ||||
| Pavan1008 (28) | ||||
| Anilkumar5681 (25) | ||||
| madguy (11) | ||||
| srinivasit2004 (8) |
feed jit like
Super symbol - uppi's new movie (Direction)
Page 1 of 1 • Share •
Super symbol - uppi's new movie (Direction)
ರಿಯಲ್ ಸ್ಟಾರ್ ಉಪೇಂದ್ರ ಮರಳಿ ನಿರ್ದೇಶನಕ್ಕೆ!
ರಿಯಲ್
ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ! ಉಪೇಂದ್ರ ಮತ್ತೆ ಆಕ್ಷನ್, ಕಟ್
ಹೇಳಲು ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ. ಸ್ವತಃ ತಾವೇ ಚಿತ್ರವೊಂದನ್ನು
ನಿರ್ಮಿಸಲಿದ್ದು ಜುಲೈ 31ರಂದು ಉಪೇಂದ್ರ ಅವರ ಹೊಸ ಚಿತ್ರ ಸೆಟ್ಟೇರಲಿದೆ.
ಎ,
ಓಂ,ಶ್, ಸ್ವಸ್ತಿಕ್, ಎಚ್ ಟುಒ ನಂತಹ ಸನ್ನೆಗಳ ಮೂಲಕ ಚಿತ್ರಗಳನ್ನು ನಿರ್ದೇಶಿಸಿದ
ಉಪೇಂದ್ರ ಈಗ ಮತ್ತೊಂದು ಚಿನ್ಹೆಯ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಈ ಬಾರಿ
ಅವರು ತಮ್ಮ ಚಿತ್ರಕ್ಕೆ 'ಕೈ' ಚಿನ್ಹೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ! ಹೆಬ್ಬೆರಳು
ಮತ್ತು ತೋರುಬೆರಳು ಉಂಗುರಾಕೃತಿಯಲ್ಲಿ ಉಳಿದ ಬೆರಳುಗಳು ನೆಟ್ಟನೆ ನಿಂತ ಸೂಪರ್
(ಅತ್ಯುತ್ತಮ)ಎಂದು ಕೈ ಸನ್ನೆ ಮೂಲಕ ತೋರುವ ಚಿನ್ಹೆಯೇ ಚಿತ್ರದ ಹೆಸರು!
ಈ
ಕೈಸನ್ನೆಗೆ ಸೃಷ್ಟಿಸುವ ಗುಣವುಳ್ಳ ಎಂಬ ಅರ್ಥವೂ ಉಂಟಂತೆ. ಶಾಸ್ತ್ರೀಯ ನೃತ್ಯಗಳಲ್ಲೂ ಈ
ಹಂಸ ಹಸ್ತಕ್ಕೆ ಪ್ರಾಮುಖ್ಯತೆಯುಂಟು. ಬುದ್ಧನ ಧ್ಯಾನಸ್ತ ಮುದ್ರೆಯೂ ಹೌದು. ಇಷ್ಟೆಲ್ಲಾ
ಪ್ರಾಮುಖ್ಯತೆಯುಳ್ಳ ಸನ್ನೆಯನ್ನು ಉಪೇಂದ್ರ ಆಯ್ಕೆ ಮಾಡಿಕೊಂಡಿರುವುದು ಪ್ರೇಕ್ಷಕರನ್ನು
ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಈ ಹಿಂದೆ ? (ಪ್ರಶ್ನಾರ್ಥಕ ಚಿನ್ಹೆ)
ಎಂಬ ಚಿತ್ರವನ್ನೂ ಉಪೇಂದ್ರ ಕೈಗೆತ್ತಿಕೊಂಡಿದ್ದರು. ಕಾರಣಾಂತರಗಳಿಂದ ಆ ಚಿತ್ರ
ನಿಂತೇಹೋಯಿತು. ತಮ್ಮ ಹೊಸ ಚಿತ್ರಕ್ಕೆ ಧ್ಯಾನ ಮುದ್ರೆಯನ್ನು ಯಾವ ರೀತಿ
ವಿನ್ಯಾಸಗೊಳಿಸಬೇಕು ಎಂಬ ಚಿಂತನೆಯಲ್ಲಿ ಉಪೇಂದ್ರ ಮುಳುಗಿದ್ದಾರೆ. ಕಳೆದ ಎರಡು
ವಾರಗಳಿಂದ ಇದಕ್ಕಾಗಿ ರಹಸ್ಯ ತಯಾರಿಯೂ ನಡೆದಿದೆಯಂತೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ರಿಯಲ್
ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ! ಉಪೇಂದ್ರ ಮತ್ತೆ ಆಕ್ಷನ್, ಕಟ್
ಹೇಳಲು ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ. ಸ್ವತಃ ತಾವೇ ಚಿತ್ರವೊಂದನ್ನು
ನಿರ್ಮಿಸಲಿದ್ದು ಜುಲೈ 31ರಂದು ಉಪೇಂದ್ರ ಅವರ ಹೊಸ ಚಿತ್ರ ಸೆಟ್ಟೇರಲಿದೆ.
ಎ,
ಓಂ,ಶ್, ಸ್ವಸ್ತಿಕ್, ಎಚ್ ಟುಒ ನಂತಹ ಸನ್ನೆಗಳ ಮೂಲಕ ಚಿತ್ರಗಳನ್ನು ನಿರ್ದೇಶಿಸಿದ
ಉಪೇಂದ್ರ ಈಗ ಮತ್ತೊಂದು ಚಿನ್ಹೆಯ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಈ ಬಾರಿ
ಅವರು ತಮ್ಮ ಚಿತ್ರಕ್ಕೆ 'ಕೈ' ಚಿನ್ಹೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ! ಹೆಬ್ಬೆರಳು
ಮತ್ತು ತೋರುಬೆರಳು ಉಂಗುರಾಕೃತಿಯಲ್ಲಿ ಉಳಿದ ಬೆರಳುಗಳು ನೆಟ್ಟನೆ ನಿಂತ ಸೂಪರ್
(ಅತ್ಯುತ್ತಮ)ಎಂದು ಕೈ ಸನ್ನೆ ಮೂಲಕ ತೋರುವ ಚಿನ್ಹೆಯೇ ಚಿತ್ರದ ಹೆಸರು!
ಈ
ಕೈಸನ್ನೆಗೆ ಸೃಷ್ಟಿಸುವ ಗುಣವುಳ್ಳ ಎಂಬ ಅರ್ಥವೂ ಉಂಟಂತೆ. ಶಾಸ್ತ್ರೀಯ ನೃತ್ಯಗಳಲ್ಲೂ ಈ
ಹಂಸ ಹಸ್ತಕ್ಕೆ ಪ್ರಾಮುಖ್ಯತೆಯುಂಟು. ಬುದ್ಧನ ಧ್ಯಾನಸ್ತ ಮುದ್ರೆಯೂ ಹೌದು. ಇಷ್ಟೆಲ್ಲಾ
ಪ್ರಾಮುಖ್ಯತೆಯುಳ್ಳ ಸನ್ನೆಯನ್ನು ಉಪೇಂದ್ರ ಆಯ್ಕೆ ಮಾಡಿಕೊಂಡಿರುವುದು ಪ್ರೇಕ್ಷಕರನ್ನು
ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಈ ಹಿಂದೆ ? (ಪ್ರಶ್ನಾರ್ಥಕ ಚಿನ್ಹೆ)
ಎಂಬ ಚಿತ್ರವನ್ನೂ ಉಪೇಂದ್ರ ಕೈಗೆತ್ತಿಕೊಂಡಿದ್ದರು. ಕಾರಣಾಂತರಗಳಿಂದ ಆ ಚಿತ್ರ
ನಿಂತೇಹೋಯಿತು. ತಮ್ಮ ಹೊಸ ಚಿತ್ರಕ್ಕೆ ಧ್ಯಾನ ಮುದ್ರೆಯನ್ನು ಯಾವ ರೀತಿ
ವಿನ್ಯಾಸಗೊಳಿಸಬೇಕು ಎಂಬ ಚಿಂತನೆಯಲ್ಲಿ ಉಪೇಂದ್ರ ಮುಳುಗಿದ್ದಾರೆ. ಕಳೆದ ಎರಡು
ವಾರಗಳಿಂದ ಇದಕ್ಕಾಗಿ ರಹಸ್ಯ ತಯಾರಿಯೂ ನಡೆದಿದೆಯಂತೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

Last edited by Admin on Tue Aug 25, 2009 3:11 pm; edited 2 times in total
_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

Admin- Admin
- Number of posts: 358
Age: 26
Location: bangalore
Points: 2429
Thanks by users: 12
Registration date: 28/12/2007


Admin- Admin
- Number of posts: 358
Age: 26
Location: bangalore
Points: 2429
Thanks by users: 12
Registration date: 28/12/2007

one more update
ಕೊನೆಗೂ ನಿರ್ದೇಶಕ
ಉಪೇಂದ್ರ ಅಭಿಮಾನಿಗಳ ಕೈಗೆ ಸಿಗುವ ಸಾಧ್ಯತೆಗಳು ಕಾಣಿಸುತ್ತಿವೆ. ನಟನೆಯಲ್ಲಿ ಮುಳುಗಿ
ಎಂದೋ ಕಳೆದುಕೊಂಡ ನಿರ್ದೇಶಕನ ಟೋಪಿಗೆ ಮತ್ತೆ ತಲೆ ತೂರಿಸಲು ಅವರೀಗ ನಿರ್ಧರಿಸಿದ್ದಾರೆ.
ಜತೆಗೆ
ಮತ್ತದೇ ಕ್ಷುಲ್ಲಕ ಗಿಮಿಕ್ಗಳನ್ನು ಪ್ರೇಕ್ಷಕರ ಮುಂದಿಡುವ ಮುನ್ಸೂಚನೆ ಅವರಿಂದ
ಬಂದಿದೆ. ಅದಕ್ಕೆ ಸಿಕ್ಕಿರುವ ಮೊದಲ ಸಾಕ್ಷಿ ಚಿತ್ರಕ್ಕೆ ಹೆಸರೇ ಇಲ್ಲದಿರುವುದು. ತೋರು
ಬೆರಳು ಮತ್ತು ಹೆಬ್ಬೆರಳನ್ನು ಉಂಗುರದಂತೆ ಮಡಚಿ ತೋರಿಸುವ ಪ್ಯೂರ್ ಅಥವಾ ಸೂಪರ್ ಎಂದು
ಹೆಸರಿಸಬಹುದಾದ ಹಸ್ತವನ್ನಷ್ಟೇ ಚಿತ್ರದ ಜಾಹಿರಾತುಗಳಲ್ಲಿ ತೋರಿಸಲಾಗಿದೆ.
ಕನ್ನಡ,
ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ಮಾಡಲಾಗುತ್ತದೆ ಎಂದು
ಮೂಲಗಳು ತಿಳಿಸಿವೆ. ನಾಯಕಿ, ಸಂಗೀತ ನಿರ್ದೇಶಕ ಸೇರಿದಂತೆ ತಾರಾ ಬಳಗದ ಬಗ್ಗೆ
ಮಾಹಿತಿಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಹೊಣೆ ಉಪ್ಪಿಯ ಹೆಗಲಲ್ಲೇ ಇದೆ.

PR
ಉಪೇಂದ್ರ ಅಭಿಮಾನಿಗಳ ಕೈಗೆ ಸಿಗುವ ಸಾಧ್ಯತೆಗಳು ಕಾಣಿಸುತ್ತಿವೆ. ನಟನೆಯಲ್ಲಿ ಮುಳುಗಿ
ಎಂದೋ ಕಳೆದುಕೊಂಡ ನಿರ್ದೇಶಕನ ಟೋಪಿಗೆ ಮತ್ತೆ ತಲೆ ತೂರಿಸಲು ಅವರೀಗ ನಿರ್ಧರಿಸಿದ್ದಾರೆ.
ಜತೆಗೆ
ಮತ್ತದೇ ಕ್ಷುಲ್ಲಕ ಗಿಮಿಕ್ಗಳನ್ನು ಪ್ರೇಕ್ಷಕರ ಮುಂದಿಡುವ ಮುನ್ಸೂಚನೆ ಅವರಿಂದ
ಬಂದಿದೆ. ಅದಕ್ಕೆ ಸಿಕ್ಕಿರುವ ಮೊದಲ ಸಾಕ್ಷಿ ಚಿತ್ರಕ್ಕೆ ಹೆಸರೇ ಇಲ್ಲದಿರುವುದು. ತೋರು
ಬೆರಳು ಮತ್ತು ಹೆಬ್ಬೆರಳನ್ನು ಉಂಗುರದಂತೆ ಮಡಚಿ ತೋರಿಸುವ ಪ್ಯೂರ್ ಅಥವಾ ಸೂಪರ್ ಎಂದು
ಹೆಸರಿಸಬಹುದಾದ ಹಸ್ತವನ್ನಷ್ಟೇ ಚಿತ್ರದ ಜಾಹಿರಾತುಗಳಲ್ಲಿ ತೋರಿಸಲಾಗಿದೆ.
ಕನ್ನಡ,
ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ಮಾಡಲಾಗುತ್ತದೆ ಎಂದು
ಮೂಲಗಳು ತಿಳಿಸಿವೆ. ನಾಯಕಿ, ಸಂಗೀತ ನಿರ್ದೇಶಕ ಸೇರಿದಂತೆ ತಾರಾ ಬಳಗದ ಬಗ್ಗೆ
ಮಾಹಿತಿಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಹೊಣೆ ಉಪ್ಪಿಯ ಹೆಗಲಲ್ಲೇ ಇದೆ.

PR
_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

Admin- Admin
- Number of posts: 358
Age: 26
Location: bangalore
Points: 2429
Thanks by users: 12
Registration date: 28/12/2007

uppi continued
ಹೇಗಿದ್ದ ಹೇಗಾದ ಗೊತ್ತಾ?
ಕಾಶಿನಾಥ್
ಗರಡಿಯಲ್ಲಿ ಪಳಗಿದ ಕುಂದಾಪುರದ ಅಪ್ಪಟ ಬ್ರಾಹ್ಮಣ ಹುಡುಗ, ಸಿನಿಮಾ ಹುಚ್ಚು
ಬೆಳೆಸಿಕೊಂಡು ಸ್ಲಿಪ್ಪರ್ ಸವೆಸಿದ್ದ ಉಪೇಂದ್ರ ಅತ್ಯುತ್ತಮ ತಂತ್ರಜ್ಞ, ನಿರ್ದೇಶಕ,
ಬರಹಗಾರ, ಕಥೆಗಾರ. ಉಪ್ಪಿಯ ಚಿತ್ರಗಳಲ್ಲಿನ ಅಶ್ಲೀಲತೆಗಳ ಬಗ್ಗೆ ಟೀಕೆ ಕೇಳಿ
ಬರುತ್ತಿರುವುದು ಸಾಮಾನ್ಯವಾದರೂ, ಉತ್ಕೃಷ್ಟ ಮಟ್ಟದ ವಿಶಿಷ್ಟ ಚಿತ್ರ ನಿರ್ದೇಶಿಸುವ
ತಾಕತ್ತು ಅವರಿಗಿದೆ ಎಂಬುದು ಅಷ್ಟೇ ನಿಜ.
90ರ
ದಶಕದಲ್ಲಿ ಏಕತಾನತೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸಂಪ್ರದಾಯಗಳನ್ನು
ಮುರಿದು ಹೊಸ ಭಾಷ್ಯವನ್ನು ಬರೆದ ನಿರ್ದೇಶಕ ಉಪೇಂದ್ರ, ಮಾಮೂಲಿ ಮರ ಸುತ್ತುವ
ಚಿತ್ರಗಳಿಗಿಂತ ಭಿನ್ನವಾಗಿ ಸಿನಿಮಾ ಮಾಡಬಹುದು ಎಂದು ಸಾಬೀತುಪಡಿಸಿದ್ದರು. ಆದರೆ
ಒಮ್ಮಿಂದೊಮ್ಮೆಲೇ ನಿರ್ದೇಶಕ ಪಟ್ಟವನ್ನು ಬದಿಗೆ ಸರಿಸಿದ್ದು ಮಾತ್ರ ಇಂದಿಗೂ ರಹಸ್ಯ.
ನಾಯಕನಾಗುವುದರಿಂದ
ಹೆಚ್ಚಿನ ಹಣ ಗಳಿಸಬಹುದು ಎಂಬ ಕಾರಣಗಳನ್ನು ನೀಡಬಹುದಾದರೂ, ಅದರ ಹಿಂದೆ ಬೇರೆ
ಕಥೆಯಿದೆ-- ಆತನ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಮಾತುಗಳೂ ಕೇಳಿ ಬಂದಿದ್ದವು. ಅದೇನೇ
ಇದ್ದರೂ ಮತ್ತೆ ನಿರ್ದೇಶನದತ್ತ ವಾಲಿರುವುದು ಚಿತ್ರರಂಗದ ಗಮನ ಸೆಳೆದಿದೆ.
ಮೊದಲ ಚಿತ್ರ ತರ್ಲೆ ನನ್ಮಗ...
ಆರಂಭದಲ್ಲಿ
ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕಥೆ ಬರೆಯುತ್ತಿದ್ದ ಉಪ್ಪಿ ನಂತರದ ದಿನಗಳಲ್ಲಿ ತನ್ನ
ಉಬ್ಬು ಹಲ್ಲುಗಳನ್ನು ಸರಿಪಡಿಸಿಕೊಂಡು, ಜಿಮ್ಗಳಿಗೆ ಹೋಗಿ ದೇಹಕ್ಕೊಂದು ಸಾಧಾರಣ ಶೇಪ್
ಕೊಡಿಸಿದ್ದರು. ವಿ. ಮನೋಹರ್, ಜಗ್ಗೇಶ್ಗಳೆಂಬ ಪೋಲಿಗಳ ಗ್ಯಾಂಗಿನಲ್ಲೇ ಬೆಳೆದದ್ದು.
ಪರಿಣಾಮ ಮೊತ್ತ ಮೊದಲ ಚಿತ್ರ 'ತರ್ಲೆ ನನ್ಮಗ'ದಲ್ಲಿ ಜಗ್ಗೇಶ್ ನಾಯಕನಾಗಿದ್ದು.
ನಂತರ
'ಶ್' ಎಂಬ ಅದ್ಭುತ ಥ್ರಿಲ್ಲರ್ ಚಿತ್ರದಲ್ಲಿ ಕುಮಾರ್ ಗೋವಿಂದ್ಗೆ, ಭೂಗತ ಜಗತ್ತಿನ
ಹಸಿಹಸಿ ಚಿತ್ರಣವನ್ನೊಳಗೊಂಡ ಪ್ರೇಮಕಥೆ 'ಓಂ'ನಲ್ಲಿ ಶಿವರಾಜ್ ಕುಮಾರ್ಗೆ ಲೈಫ್ ಕೊಟ್ಟ
ಉಪ್ಪಿ ನಿರ್ದೇಶನದಲ್ಲಿ ಕಳೆದುಕೊಂಡದ್ದು 'ಅಪರೇಶನ್ ಅಂತ'ದಲ್ಲಿ.
ಅನಂತನ
ಅವಾಂತರ, ಅಜಗಜಾಂತರ, ಶ್, ಅಪರೇಶನ್ ಅಂತ ಮುಂತಾದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ
ಬಂದು ಹೋಗಿದ್ದ ಉಪೇಂದ್ರ 'ಎ' ಚಿತ್ರದ ಮೂಲಕ ನಾಯಕ ಪಟ್ಟವನ್ನೇರಿದರು. ಚಿತ್ರ ವಿಚಿತ್ರ
ಗೆಟಪ್ಗಳಲ್ಲಿ ಕಾಣಿಸಿಕೊಂಡು ಕೆಟ್ಟ ಅಭಿನಯ ನೀಡಿದರೂ ಭಿನ್ನ ಜಾಹೀರಾತು,
ತಂತ್ರಜ್ಞಾನದ ಬಳಕೆ, ಚಿತ್ರಕಥೆ, ಗುರುಕಿರಣ್ ಸಂಗೀತದ ಮೂಲಕ ದಿನ ಬೆಳಗಾಗುವುದರೊಳಗೆ
ಉಪೇಂದ್ರ ಸೂಪರ್ ಸ್ಟಾರ್ ಆಗಿದ್ದರು.
PR
ಕಾಶಿನಾಥ್
ಗರಡಿಯಲ್ಲಿ ಪಳಗಿದ ಕುಂದಾಪುರದ ಅಪ್ಪಟ ಬ್ರಾಹ್ಮಣ ಹುಡುಗ, ಸಿನಿಮಾ ಹುಚ್ಚು
ಬೆಳೆಸಿಕೊಂಡು ಸ್ಲಿಪ್ಪರ್ ಸವೆಸಿದ್ದ ಉಪೇಂದ್ರ ಅತ್ಯುತ್ತಮ ತಂತ್ರಜ್ಞ, ನಿರ್ದೇಶಕ,
ಬರಹಗಾರ, ಕಥೆಗಾರ. ಉಪ್ಪಿಯ ಚಿತ್ರಗಳಲ್ಲಿನ ಅಶ್ಲೀಲತೆಗಳ ಬಗ್ಗೆ ಟೀಕೆ ಕೇಳಿ
ಬರುತ್ತಿರುವುದು ಸಾಮಾನ್ಯವಾದರೂ, ಉತ್ಕೃಷ್ಟ ಮಟ್ಟದ ವಿಶಿಷ್ಟ ಚಿತ್ರ ನಿರ್ದೇಶಿಸುವ
ತಾಕತ್ತು ಅವರಿಗಿದೆ ಎಂಬುದು ಅಷ್ಟೇ ನಿಜ.
90ರ
ದಶಕದಲ್ಲಿ ಏಕತಾನತೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸಂಪ್ರದಾಯಗಳನ್ನು
ಮುರಿದು ಹೊಸ ಭಾಷ್ಯವನ್ನು ಬರೆದ ನಿರ್ದೇಶಕ ಉಪೇಂದ್ರ, ಮಾಮೂಲಿ ಮರ ಸುತ್ತುವ
ಚಿತ್ರಗಳಿಗಿಂತ ಭಿನ್ನವಾಗಿ ಸಿನಿಮಾ ಮಾಡಬಹುದು ಎಂದು ಸಾಬೀತುಪಡಿಸಿದ್ದರು. ಆದರೆ
ಒಮ್ಮಿಂದೊಮ್ಮೆಲೇ ನಿರ್ದೇಶಕ ಪಟ್ಟವನ್ನು ಬದಿಗೆ ಸರಿಸಿದ್ದು ಮಾತ್ರ ಇಂದಿಗೂ ರಹಸ್ಯ.
ನಾಯಕನಾಗುವುದರಿಂದ
ಹೆಚ್ಚಿನ ಹಣ ಗಳಿಸಬಹುದು ಎಂಬ ಕಾರಣಗಳನ್ನು ನೀಡಬಹುದಾದರೂ, ಅದರ ಹಿಂದೆ ಬೇರೆ
ಕಥೆಯಿದೆ-- ಆತನ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಮಾತುಗಳೂ ಕೇಳಿ ಬಂದಿದ್ದವು. ಅದೇನೇ
ಇದ್ದರೂ ಮತ್ತೆ ನಿರ್ದೇಶನದತ್ತ ವಾಲಿರುವುದು ಚಿತ್ರರಂಗದ ಗಮನ ಸೆಳೆದಿದೆ.
ಮೊದಲ ಚಿತ್ರ ತರ್ಲೆ ನನ್ಮಗ...
ಆರಂಭದಲ್ಲಿ
ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕಥೆ ಬರೆಯುತ್ತಿದ್ದ ಉಪ್ಪಿ ನಂತರದ ದಿನಗಳಲ್ಲಿ ತನ್ನ
ಉಬ್ಬು ಹಲ್ಲುಗಳನ್ನು ಸರಿಪಡಿಸಿಕೊಂಡು, ಜಿಮ್ಗಳಿಗೆ ಹೋಗಿ ದೇಹಕ್ಕೊಂದು ಸಾಧಾರಣ ಶೇಪ್
ಕೊಡಿಸಿದ್ದರು. ವಿ. ಮನೋಹರ್, ಜಗ್ಗೇಶ್ಗಳೆಂಬ ಪೋಲಿಗಳ ಗ್ಯಾಂಗಿನಲ್ಲೇ ಬೆಳೆದದ್ದು.
ಪರಿಣಾಮ ಮೊತ್ತ ಮೊದಲ ಚಿತ್ರ 'ತರ್ಲೆ ನನ್ಮಗ'ದಲ್ಲಿ ಜಗ್ಗೇಶ್ ನಾಯಕನಾಗಿದ್ದು.
ನಂತರ
'ಶ್' ಎಂಬ ಅದ್ಭುತ ಥ್ರಿಲ್ಲರ್ ಚಿತ್ರದಲ್ಲಿ ಕುಮಾರ್ ಗೋವಿಂದ್ಗೆ, ಭೂಗತ ಜಗತ್ತಿನ
ಹಸಿಹಸಿ ಚಿತ್ರಣವನ್ನೊಳಗೊಂಡ ಪ್ರೇಮಕಥೆ 'ಓಂ'ನಲ್ಲಿ ಶಿವರಾಜ್ ಕುಮಾರ್ಗೆ ಲೈಫ್ ಕೊಟ್ಟ
ಉಪ್ಪಿ ನಿರ್ದೇಶನದಲ್ಲಿ ಕಳೆದುಕೊಂಡದ್ದು 'ಅಪರೇಶನ್ ಅಂತ'ದಲ್ಲಿ.
ಅನಂತನ
ಅವಾಂತರ, ಅಜಗಜಾಂತರ, ಶ್, ಅಪರೇಶನ್ ಅಂತ ಮುಂತಾದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ
ಬಂದು ಹೋಗಿದ್ದ ಉಪೇಂದ್ರ 'ಎ' ಚಿತ್ರದ ಮೂಲಕ ನಾಯಕ ಪಟ್ಟವನ್ನೇರಿದರು. ಚಿತ್ರ ವಿಚಿತ್ರ
ಗೆಟಪ್ಗಳಲ್ಲಿ ಕಾಣಿಸಿಕೊಂಡು ಕೆಟ್ಟ ಅಭಿನಯ ನೀಡಿದರೂ ಭಿನ್ನ ಜಾಹೀರಾತು,
ತಂತ್ರಜ್ಞಾನದ ಬಳಕೆ, ಚಿತ್ರಕಥೆ, ಗುರುಕಿರಣ್ ಸಂಗೀತದ ಮೂಲಕ ದಿನ ಬೆಳಗಾಗುವುದರೊಳಗೆ
ಉಪೇಂದ್ರ ಸೂಪರ್ ಸ್ಟಾರ್ ಆಗಿದ್ದರು.

PR
_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

Admin- Admin
- Number of posts: 358
Age: 26
Location: bangalore
Points: 2429
Thanks by users: 12
Registration date: 28/12/2007

continued
ನಂತರ
ಪಾತ್ರಕ್ಕೆ ಹೊಂದಾಣಿಕೆಯೇ ಆಗದ ರಾಘವೇಂದ್ರ ರಾಜ್ಕುಮಾರ್ಗೆ 'ಸ್ವಸ್ತಿಕ್' ಎಂಬ
ಚಿತ್ರವನ್ನು ನಿರ್ದೇಶಿಸಿದರೂ ಯಶಸ್ವಿಯಾಗಲಿಲ್ಲ. ಭಯೋತ್ಪಾದನೆ ಕುರಿತ ಕಥೆ,
ಅತ್ಯುತ್ತಮ ನಿರ್ದೇಶನದ ಹೊರತಾಗಿಯೂ ಪ್ರೇಕ್ಷಕರಿಗದು ಹತ್ತಿರವಾಗಲಿಲ್ಲ. ಆದರೂ
ಪಾರ್ವತಮ್ಮ ರಾಜ್ ಕುಮಾರ್ ತನ್ನ ಮಗನನ್ನು 'ಉಗ್ರಗಾಮಿ'ಯನ್ನಾಗಿ ತೋರಿಸಿದ ಎಂದು
ಉಪ್ಪಿಯನ್ನು ಅನಗತ್ಯವಾಗಿ ಬೇಕಾಬಿಟ್ಟಿ ಟೀಕಿಸಿದರು.
ಮಾನಸಿಕ
ತುಮುಲಗಳನ್ನೊಳಗೊಂಡ ಕಥೆಗೆ ತನ್ನ ಹೆಸರನ್ನೇ ಶೀರ್ಷಿಕೆಯನ್ನಾಗಿಸಿ, ಮೂರು ಮಂದಿ
ನಟಿಯರನ್ನು ಬಳಸಿ ನಿರ್ದೇಶಿಸಿ, ನಟಿಸಿದ ಚಿತ್ರ 'ಉಪೇಂದ್ರ' ಸೂಪರ್ ಹಿಟ್ ಆಯ್ತು.
ಚಿತ್ರದಲ್ಲಿನ ಅಶ್ಲೀಲ ಭಾಷೆಗಾಗಿ ತೀವ್ರ ಟೀಕೆಗಳನ್ನೆದುರಿಸಬೇಕಾಯಿತಾದರೂ
ಪ್ರಯೋಗಶೀಲತೆಯನ್ನು ಬಹುತೇಕ ಮಂದಿ ಒಪ್ಪಿಕೊಂಡರು.
ಅದೇ
ಕೊನೆ. ಆ ನಂತರ ಉಪ್ಪಿ ನಿರ್ದೇಶಕನ ಟೋಪಿಯನ್ನು ಧರಿಸಿಲ್ಲ. ಪ್ರೀತ್ಸೆ, ಹೆಚ್ಟುಓ,
ಸೂಪರ್ಸ್ಟಾರ್, ನಾಗರಹಾವು, ನಾನು ನಾನೇ, ಹಾಲಿವುಡ್, ಕುಟುಂಬ, ರಕ್ತ ಕಣ್ಣೀರು,
ಓಂಕಾರ, ಗೋಕರ್ಣ, ಗೌರಮ್ಮ, ನ್ಯೂಸ್, ಆಟೋ ಶಂಕರ್, ಉಪ್ಪಿ ದಾದಾ ಎಂಬಿಬಿಎಸ್, ತಂದೆಗೆ
ತಕ್ಕ ಮಗ, ಐಶ್ವರ್ಯಾ, ಪರೋಡಿ, ಮಸ್ತಿ, ಅನಾಥರು, ಲವಕುಶ, ಬುದ್ಧಿವಂತ, ದುಬೈ ಬಾಬು
ಮುಂತಾದ ಚಿತ್ರಗಳಲ್ಲಿ ಬಹುತೇಕ ತೋಪಾಗಿದ್ದರೂ ಬೇಡಿಕೆ ಕಡಿಮೆಯಾಗಲಿಲ್ಲ. ಹೆಚ್ಚು
ಕಡಿಮೆ ರಿಮೇಕ್ ಚಿತ್ರಗಳಾಗಿರುವ ಇವುಗಳ ಬಗ್ಗೆ ಮಾತನಾಡದಿರುವುದೇ ಉತ್ತಮ.
ಆದರೂ
ಉಪ್ಪಿ ನಿರ್ದೇಶನಕ್ಕೆ ವಾಪಸಾಗುವ ಸೂಚನೆ ನೀಡಿದರೂ ಹಿಂದಿನ ಚಾರ್ಮ್ ಕಂಡುಕೊಳ್ಳುವುದು
ಸಾಧ್ಯವೇ ಎಂಬ ಪ್ರಶ್ನೆಗಳೇಳುತ್ತಿವೆ. ಅದೇ ಗಿಮಿಕ್ಗಳು ಈಗಲೂ ಪ್ರೇಕ್ಷಕರಿಗೆ
ಇಷ್ಟವಾಗದು. ಹೊಸತು 42ರ ಉಪೇಂದ್ರನ ತಲೆಯಲ್ಲಿ ಮೂಡಬಹುದೇ? ಯೋಗರಾಜ್ ಭಟ್, ಪ್ರೇಮ್,
ಸೂರಿ, ಶಶಾಂಕ್, ಗುರುಪ್ರಸಾದ್ರಂತಹ ನಿರ್ದೇಶಕರು ಸಾಕಷ್ಟು ವ್ಯಾಪಿಸಿರುವ
ಸಂದರ್ಭದಲ್ಲಿ ಉಪ್ಪಿ ಮ್ಯಾಜಿಕ್ ಹೇಗೆ ನಡೆಯಬಹುದು ಎಂಬುದು ಕುತೂಹಲಕಾರಿ.
ಪಾತ್ರಕ್ಕೆ ಹೊಂದಾಣಿಕೆಯೇ ಆಗದ ರಾಘವೇಂದ್ರ ರಾಜ್ಕುಮಾರ್ಗೆ 'ಸ್ವಸ್ತಿಕ್' ಎಂಬ
ಚಿತ್ರವನ್ನು ನಿರ್ದೇಶಿಸಿದರೂ ಯಶಸ್ವಿಯಾಗಲಿಲ್ಲ. ಭಯೋತ್ಪಾದನೆ ಕುರಿತ ಕಥೆ,
ಅತ್ಯುತ್ತಮ ನಿರ್ದೇಶನದ ಹೊರತಾಗಿಯೂ ಪ್ರೇಕ್ಷಕರಿಗದು ಹತ್ತಿರವಾಗಲಿಲ್ಲ. ಆದರೂ
ಪಾರ್ವತಮ್ಮ ರಾಜ್ ಕುಮಾರ್ ತನ್ನ ಮಗನನ್ನು 'ಉಗ್ರಗಾಮಿ'ಯನ್ನಾಗಿ ತೋರಿಸಿದ ಎಂದು
ಉಪ್ಪಿಯನ್ನು ಅನಗತ್ಯವಾಗಿ ಬೇಕಾಬಿಟ್ಟಿ ಟೀಕಿಸಿದರು.
ಮಾನಸಿಕ
ತುಮುಲಗಳನ್ನೊಳಗೊಂಡ ಕಥೆಗೆ ತನ್ನ ಹೆಸರನ್ನೇ ಶೀರ್ಷಿಕೆಯನ್ನಾಗಿಸಿ, ಮೂರು ಮಂದಿ
ನಟಿಯರನ್ನು ಬಳಸಿ ನಿರ್ದೇಶಿಸಿ, ನಟಿಸಿದ ಚಿತ್ರ 'ಉಪೇಂದ್ರ' ಸೂಪರ್ ಹಿಟ್ ಆಯ್ತು.
ಚಿತ್ರದಲ್ಲಿನ ಅಶ್ಲೀಲ ಭಾಷೆಗಾಗಿ ತೀವ್ರ ಟೀಕೆಗಳನ್ನೆದುರಿಸಬೇಕಾಯಿತಾದರೂ
ಪ್ರಯೋಗಶೀಲತೆಯನ್ನು ಬಹುತೇಕ ಮಂದಿ ಒಪ್ಪಿಕೊಂಡರು.
ಅದೇ
ಕೊನೆ. ಆ ನಂತರ ಉಪ್ಪಿ ನಿರ್ದೇಶಕನ ಟೋಪಿಯನ್ನು ಧರಿಸಿಲ್ಲ. ಪ್ರೀತ್ಸೆ, ಹೆಚ್ಟುಓ,
ಸೂಪರ್ಸ್ಟಾರ್, ನಾಗರಹಾವು, ನಾನು ನಾನೇ, ಹಾಲಿವುಡ್, ಕುಟುಂಬ, ರಕ್ತ ಕಣ್ಣೀರು,
ಓಂಕಾರ, ಗೋಕರ್ಣ, ಗೌರಮ್ಮ, ನ್ಯೂಸ್, ಆಟೋ ಶಂಕರ್, ಉಪ್ಪಿ ದಾದಾ ಎಂಬಿಬಿಎಸ್, ತಂದೆಗೆ
ತಕ್ಕ ಮಗ, ಐಶ್ವರ್ಯಾ, ಪರೋಡಿ, ಮಸ್ತಿ, ಅನಾಥರು, ಲವಕುಶ, ಬುದ್ಧಿವಂತ, ದುಬೈ ಬಾಬು
ಮುಂತಾದ ಚಿತ್ರಗಳಲ್ಲಿ ಬಹುತೇಕ ತೋಪಾಗಿದ್ದರೂ ಬೇಡಿಕೆ ಕಡಿಮೆಯಾಗಲಿಲ್ಲ. ಹೆಚ್ಚು
ಕಡಿಮೆ ರಿಮೇಕ್ ಚಿತ್ರಗಳಾಗಿರುವ ಇವುಗಳ ಬಗ್ಗೆ ಮಾತನಾಡದಿರುವುದೇ ಉತ್ತಮ.
ಆದರೂ
ಉಪ್ಪಿ ನಿರ್ದೇಶನಕ್ಕೆ ವಾಪಸಾಗುವ ಸೂಚನೆ ನೀಡಿದರೂ ಹಿಂದಿನ ಚಾರ್ಮ್ ಕಂಡುಕೊಳ್ಳುವುದು
ಸಾಧ್ಯವೇ ಎಂಬ ಪ್ರಶ್ನೆಗಳೇಳುತ್ತಿವೆ. ಅದೇ ಗಿಮಿಕ್ಗಳು ಈಗಲೂ ಪ್ರೇಕ್ಷಕರಿಗೆ
ಇಷ್ಟವಾಗದು. ಹೊಸತು 42ರ ಉಪೇಂದ್ರನ ತಲೆಯಲ್ಲಿ ಮೂಡಬಹುದೇ? ಯೋಗರಾಜ್ ಭಟ್, ಪ್ರೇಮ್,
ಸೂರಿ, ಶಶಾಂಕ್, ಗುರುಪ್ರಸಾದ್ರಂತಹ ನಿರ್ದೇಶಕರು ಸಾಕಷ್ಟು ವ್ಯಾಪಿಸಿರುವ
ಸಂದರ್ಭದಲ್ಲಿ ಉಪ್ಪಿ ಮ್ಯಾಜಿಕ್ ಹೇಗೆ ನಡೆಯಬಹುದು ಎಂಬುದು ಕುತೂಹಲಕಾರಿ.
_________________
To say thanks press '+'
ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ

Admin- Admin
- Number of posts: 358
Age: 26
Location: bangalore
Points: 2429
Thanks by users: 12
Registration date: 28/12/2007


Admin- Admin
- Number of posts: 358
Age: 26
Location: bangalore
Points: 2429
Thanks by users: 12
Registration date: 28/12/2007

Permissions of this forum:
You cannot reply to topics in this forum





















» "Yaaradu" - Leelavathi & VinodRaj
» Sampathige Saval (1974) Kannada Xvid 700 MB only
» Kidney Kidnyap - Comedy Drama
» Dagar Mestru - Comedy Drama
» Neethu's - ದಪ್ಪ ಆಗೋದು ...
» NO expose PLEASE!!!! - Harshika Poonachaa
» Minugu has passed Sensor - Puja
» Havaldaar Hanumantappa - Comedy Drama
» IPC Sec 300 - A thriller to Kannada movie